ಮುಹೂರ್ತದ ದಿನವೇ ಒಂದು ಉತ್ತಮ ಟ್ರೈಲರ್ ಸಿದ್ದಪಡಿಸಿ ಎಲ್ಲರ ಗಮನ ಸೆಳೆದು ನಂತರ ತಯಾರಾಗಿರುವ ಡಾಲ್ಫಿನ್ ಎಂಟರ್ಟೈನ್ಮೆಂಟ್ ನಿರ್ಮಾಣದ ಮಂಜುನಾಥ್ ವಿ ಕಂದಕೂರ ನಿರ್ಮಾಣದ, ನರೇಶ್ ಕುಮಾರ್ ಎಚ್ ಎನ್ (ಹೊಸಹಳ್ಳಿ) ‘ಫಸ್ಟ್ ರ್ಯಾಂಕ್ ರಾಜು’ ಅವರ ಚೊಚ್ಚಲ ಮತ್ತು ನಿರೀಕ್ಷೆ ಹುಟ್ಟಿಸಿರುವ ಸಿನಿಮಾ ನಾಳೆಯಿಂದ ಡುಗಡೆ ಆಗುತ್ತಿದೆ.
‘ವಿದ್ಯೆ ೧೦೦% ಬುದ್ದಿ ೦%’ ಎನ್ನುವ ಅಡಿಬರಹದೊಂದಿಗೆ ನಿರ್ಮಾಣವಾಗಿರುವ ಚಿತ್ರ ‘ಫಸ್ಟ್ ರ್ಯಾಂಕ್ ರಾಜು’. ಎಂಥಾ ವಿದ್ಯಾವಂತರೇ ಆದರೂ ಬದುಕಲು ಸಾಮಾನ್ಯeನ ಹೊಂದಿರಬೇಕು ಎನ್ನುವ ವಿಚಾರವನ್ನು ಹಾಸ್ಯ ಮಿಶ್ರಿತ ಧಾಟಿಯಲ್ಲಿ ಮೊದಲ ನಿರ್ದೇಶನದಲ್ಲಿ ನರೇಶ್ ಕುಮಾರ್ ನಿರೂಪಿಸಿದ್ದಾರೆ. ಚಿತ್ರಕ್ಕೆ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಸಹ ಇವರೇ ಒದಗಿಸಿದ್ದಾರೆ.
ಕಿರಣ್ ರವೀಂದ್ರನಾಥ್ ಅವರ ಸಂಗೀತ, ಪ್ರವೀಣ್ ಎಸ್ ಛಾಯಾಗ್ರಹಣ, ಗಿರಿ ಮಹೇಶ್ ಅವರ ಸಂಕಲನ, ಯೋಗರಾಜ್ ಭಟ್, ಜಯಂತ್ ಕಾಯ್ಕಿಣಿ, ಹೃದಯ ಶಿವ ಅವರು ಗೀತ ಸಾಹಿತ್ಯ ಒದಗಿಸಿದ್ದಾರೆ.
ಗುರುನಂದನ್, ಅಪೂರ್ವ, ತನಿಷಾ ಕಪೂರ್, ಅನಂತ್ ನಾಗ್, ಅಚ್ಯುತ್ ಕುಮಾರ್, ಸಾಧು ಕೋಕಿಲ, ಸುಧಾ ಬೆಳವಾಡಿ ಹಾಗೂ ಇತರರು ತಾರಾಗಣದಲ್ಲಿ ಇದ್ದಾರೆ.